ಚಿಟ್ಟಾಣಿ ಪ್ರಶಸ್ತಿ ಪ್ರದಾನ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ನವ೦ಬರ್ 11 , 2013
|
ನವ೦ಬರ್ 11 , 2013
|
ಚಿಟ್ಟಾಣಿ ಪ್ರಶಸ್ತಿ ಪ್ರದಾನ
ಉಡುಪಿ :
ಹಿರಿಯ ಯಕ್ಷಗಾನ ಕಲಾವಿದ 'ಪದ್ಮಶ್ರೀ' ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಹೆಸರಿನಲ್ಲಿ ಆರಂಭಿಸಲಾಗಿರುವ ಪ್ರಶಸ್ತಿಯನ್ನು ಈ ಬಾರಿ ನ. 11ರಂದು ರಾಜಾಂಗಣದಲ್ಲಿ ಜರಗಿದ 'ಚಿಟ್ಟಾಣಿ ಯಕ್ಷಗಾನ ಸಪ್ತಾಹ -2013'ರ ಸಮಾರೋಪ ಸಮಾರಂಭದಲ್ಲಿ ಪರ್ಯಾಯ ಶ್ರೀ ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಹಿರಿಯ ಕಲಾವಿದ ಜಲವಳ್ಳಿ ವೆಂಕಟೇಶ ರಾವ್ ಅವರಿಗೆ ಪ್ರದಾನ ಮಾಡಿದರು.
|
ಜಲವಳ್ಳಿ ವೆಂಕಟೇಶ ರಾವ್ ಅವರಿಗೆ ಚಿಟ್ಟಾಣಿ ಪ್ರಶಸ್ತಿಯನ್ನು ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಪ್ರದಾನ ಮಾಡಿದರು.
|
ಶ್ರೀಗಳು ಆಶೀರ್ವಚನ ನೀಡಿ 'ಶ್ರೇಷ್ಠ ಕಲಾವಿದರಿಗೆ ಅವರ ಕಲಾ ಪ್ರತಿಭೆ, ಸಾಮರ್ಥ್ಯದ ಪ್ರದರ್ಶನಕ್ಕೆ ಸಿಗುವ ಉತ್ತಮ ವೇದಿಕೆಯ ಅವಕಾಶವೇ ಶ್ರೇಷ್ಠ ಗೌರವ ಎಂದೆನಿಸುತ್ತದೆ. ಅಂತೆಯೇ ಚಿಟ್ಟಾಣಿ ಅಭಿಮಾನ ಬಳಗವು ಪ್ರತೀ ವರ್ಷ ಕೂಡ ಚಿಟ್ಟಾಣಿ ಸಪ್ತಾಹ ನಡೆಸುತ್ತಾ ಚಿಟ್ಟಾಣಿಯವರಿಗೆ ಒಂದು ವಾರಗಳ ಕಾಲ ನಿತ್ಯ ಸಮ್ಮಾನ ನೆರವೇರಿಸುತ್ತಿದೆ. ಇದು ನಿರಂತರವಾಗಿ ಮುಂದುವರಿಯಲಿ' ಎಂದರು.
ಚಿಟ್ಟಾಣಿ ಪ್ರಶಸ್ತಿ ಸ್ವೀಕರಿಸಿದ ಒಂದು ಕಾಲದಲ್ಲಿ ಚಿಟ್ಟಾಣಿಯವರ ಜತೆ ಕಲಾವಿದ ಜಲವಳ್ಳಿ ವೆಂಕಟೇಶ ರಾವ್ ಅವರು ಮಾತನಾಡಿ 'ನನ್ನ ಸುದೀರ್ಘ ಯಕ್ಷಗಾನ ಸೇವೆಯಲ್ಲಿ ಇದೀಗ ಲಭಿಸುತ್ತಿರುವ ಚಿಟ್ಟಾಣಿ ಪ್ರಶಸ್ತಿ ನಿಜ ಅರ್ಥದ ಸಂತೋಷ ತಂದಿದೆ. ಒಡನಾಡಿ ಹೆಸರಿನಿಂದ ಪಡೆದ ಪ್ರಶಸ್ತಿಯಿಂದ ಧನ್ಯನಾದೆ' ಎಂದರು.
ಚಿಟ್ಟಾಣಿ ಅಭಿಮಾನಿ ಬಳಗದ ಗೌರವಾಧ್ಯಕ್ಷರಾಗಿದ್ದ ಟಿ.ವಿ. ರಾವ್ ಅವರ ಹೆಸರಿನಲ್ಲಿ ಅವರ ಮಕ್ಕಳು ಸ್ಥಾಪಿಸಿದ 'ಟಿ.ವಿ. ರಾವ್ ಪ್ರಶಸ್ತಿ'ಯನ್ನು ಹಿರಿಯ ಅರ್ಥದಾರಿ ಕೆ. ರಘುರಾಮ ಶೆಟ್ಟಿ ಅವರಿಗೆ ಪ್ರದಾನ ಮಾಡಲಾಯಿತು.
ಕಲಾವಿದ ಆರ್ಗೋಡು ಮೋಹನದಾಸ ಶೆಣೈ, ಸಾಹಿತಿ ಜಿ.ಎಸ್.ಭಟ್ ಮೈಸೂರು, ನ್ಯಾಯವಾದಿ ರವಿರಾಜ್ ಕುಮಾರ್, ಹೈಟೆಕ್ ಮೆಡಿಕೇರ್ ಆಸ್ಪತ್ರೆಯ ನಿರ್ದೇಶಕ ಡಾ| ಟಿ.ಎಸ್. ರಾವ್, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಅಭಿಮಾನಿ ಬಳಗದ ಸಂಚಾಲಕ ತಲ್ಲೂರು ಶಿವರಾಮ ಶೆಟ್ಟಿ ಸ್ವಾಗತಿಸಿದರು. ನಾರಾಯಣ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.
ಕೃಪೆ : http://http://www.udayavani.com
|
|
|